Latest Kannada Nation & World

ಇಂದಿನಿಂದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಅಚ್ಚರಿಯ ಬದಲಾವಣೆಗಳು; ಸೀತಾ ರಾಮ ಸೀರಿಯಲ್‌ಗೆ ಅಗ್ನಿಪರೀಕ್ಷೆ

Share This Post ????

ಸ್ಟಾರ್‌ ಸುವರ್ಣದಲ್ಲಿ ಅವನು ಮತ್ತೆ ಶ್ರಾವಣಿ

ಸ್ಟಾರ್ ಸುವರ್ಣ ವಾಹಿನಿಯ ‘ಅವನು ಮತ್ತೆ ಶ್ರಾವಣಿ’ ಸೀರಿಯಲ್‌ ಈಗಾಗಲೇ 400 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿದೆ. ಈಗ ಈ ಧಾರಾವಾಹಿಯಲ್ಲಿ ಇನ್ಮುಂದೆ ಒಂದು ಭಯಾನಕ ಸೇಡಿನ ಸಂಘರ್ಷದ ತಿರುವು ಬರಲಿದೆ. ಎರಡಕ್ಷರದ ಪ್ರೀತಿಗೆ ಮನಸೋತು ಅಭಿ- ಶ್ರಾವಣಿಯ ಬಾಳಲ್ಲಿ ಎರಡನೇ ಅವಕಾಶ ಸಿಕ್ಕೇ ಬಿಡ್ತು ಅನ್ನುವಷ್ಟರಲ್ಲಿ, ಇದೀಗ ಕುತಂತ್ರಿ ಸಂಯುಕ್ತಾಳ ಸಂಚಿಗೆ ಶ್ರಾವಣಿಯ ಜೀವ ಅಪಾಯದಲ್ಲಿದೆ. ಕಥೆಯಲ್ಲಿ ಅಧೀರ ಎಂಬ ಆತ್ಮದ ಆಗಮನವಾಗಲಿದ್ದು, ಸಂಯುಕ್ತಾಳಿಗೆ ಅಧೀರನ ಶಕ್ತಿ ವರದಂತೆ ಸಿಕ್ಕಾಗಿದೆ. ಈ ಅಧೀರ ಯಾರು? ಸಂಯುಕ್ತಾಳಿಗೂ ಅಧೀರನಿಗೂ ಇರೋ ಸಂಬಂಧವೇನು? ಸಂಯುಕ್ತಾಳ ನಿಜರೂಪವನ್ನು ಹೊರತರುವಲ್ಲಿ ಶ್ರಾವಣಿ ಯಶಸ್ವಿಯಾಗ್ತಾಳಾ? ಅತ್ತೆ ತಾಯಿಯ ಎರಡನೇ ರೂಪ ಎಂಬ ಭ್ರಮೆಯಲ್ಲಿರೋ ಅಭಿಮನ್ಯುವಿಗೆ ಸತ್ಯದ ಅರಿವಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಂದಿನಿಂದ ರಾತ್ರಿ 10ಗಂಟೆಗೆ ಸ್ಟಾರ್‌ ಸುವರ್ಣದಲ್ಲಿ ಸಿಗಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!