Latest Kannada Nation & World
ಅಂದುಕೊಂಡದ್ದೆಲ್ಲಾ ಉಲ್ಟಾ ಆಗ್ತಿದೆ, ಭಾಗ್ಯಾಗೆ ಹೆದರಿ ಅವಳ ಜೊತೆ ಶಾಪಿಂಗ್ ಹೊರಟ ತಾಂಡವ್ ಸೂರ್ಯವಂಶಿ; ಭಾಗ್ಯಲಕ್ಷ್ಮೀ ಧಾರಾವಾಹಿ

ಅಷ್ಟರಲ್ಲಿ ಕುಸುಮಾ ತಾಂಡವ್ಗೆ ಕರೆ ಮಾಡುತ್ತಾಳೆ. ಎಲ್ಲಾ ಸರಿ ಇದೆ ತಾನೇ, ಭಾಗ್ಯಾ ಹೇಗಿದ್ದಾಳೆ ಎಂದು ಕೇಳುತ್ತಾಳೆ. ಅವಳಿಗೆ ಏನು ಆಗಿದೆ, ಅವಳು ಚೆನ್ನಾಗಿ ಇದ್ದಾಳೆ ಆಗಿರೋದೆಲ್ಲಾ ನನಗೆ, ನಾಳೆ ಮದುವೆ ದಿನ ಅಂತ ಶಾಪಿಂಗ್ ಮಾಡೋಕೆ ಕರೆದುಕೊಂಡು ಬಂದಿದ್ದಾಳೆ. ಒಂದು ತಿಂಗಳು ಎಷ್ಟೊತ್ತಿಗೆ ಬರುತ್ತೋ ಎಂದು ಕಾಯುತ್ತಿದ್ದೇನೆ ಎನ್ನುತ್ತಾನೆ. ಅಷ್ಟರೊಳಗೆ ನೀನು ಏನೂ ಮಾತನಾಡುವಂತಿಲ್ಲ. ಭಾಗ್ಯಾ ಏನು ಕೇಳಿದರೂ ನೀನು ಕೊಡಿಸಬೇಕು, ಇಲ್ಲದಿದ್ದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಕುಸುಮಾ ಮತ್ತೆ ತಾಂಡವ್ನನ್ನು ಎಚ್ಚರಿಸುತ್ತಾಳೆ. ಇದಕ್ಕೆ ಹೆದರಿದ ತಾಂಡವ್ ಆಯ್ತು ಕೊಡಿಸುತ್ತೇನೆ ಎನ್ನುತ್ತಾನೆ. ಭಾಗ್ಯಾ ತನಗೆ ಸೀರೆ ಸೆಲೆಕ್ಟ್ ಮಾಡಲು ಬಿಟ್ಟು ಅವನಿಗೆ ಡ್ರೆಸ್ ತರಲು ಹೋಗುತ್ತಾಳೆ.