Latest Kannada Nation & World
ಆರು ವರ್ಷಗಳ ನಂತರ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ ತೆರೆಗೆ; ಜನವರಿ 24ರಂದು ‘ರಾಯಲ್’ ಬಿಡುಗಡೆ

ಇದಕ್ಕೂ ಮೊದಲು ದಿನಕರ್, ಪುನೀತ್ ರಾಜಕುಮಾರ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು. ಈ ಚಿತ್ರದ ಘೋಷಣೆ ಸಹ ಆಗಿತ್ತು. ಜಯಣ್ಣ ಫಿಲಂಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಬೇಕಿತ್ತು. ಆದರೆ, ಅಷ್ಟರಲ್ಲಿ ಪುನೀತ್ ರಾಜ್ಕುಮಾರ್ ನಿಧನರಾದ್ದರಿಂದ, ಚಿತ್ರ ರದ್ದಾಯಿತು. ಈ ಮಧ್ಯೆ, ಜಯಣ್ಣ ಫಿಲಂಸ್ ಬಳಿ ನಟ ವಿರಾಟ್ ಹಾಗೂ ದಿನಕರ್ ತೂಗುದೀಪ ಇಬ್ಬರ ಕಾಲ್ಶೀಟ್ ಇತ್ತು. ಹಾಗಾಗಿ, ದಿನಕರ್ ನಿರ್ದೇಶನದಲ್ಲಿ ಮತ್ತು ವಿರಾಟ್ ಅಭಿನಯದಲ್ಲಿ ಜಯಣ್ಣ, ‘ರಾಯಲ್’ ಚಿತ್ರವನ್ನು ನಿರ್ಮಿಸಿದ್ದಾರೆ.