Latest Kannada Nation & World
ಜೈಲಿನಿಂದಲೇ ಕುತಂತ್ರ ಆರಂಭಿಸಿದ ಕಾವೇರಿ; ಕೀರ್ತಿ ಮಾತು ಕೇಳಿ ಕಂಗಾಲಾದ ಲಕ್ಷ್ಮೀ ಫ್ಯಾಮಿಲಿ

Lakshmi Baramma Serial: ಲಕ್ಷ್ಮೀ ಜೀವನದಲ್ಲಿ ಮತ್ತೆ ಕಷ್ಟದ ದಿನಗಳು ಆರಂಭ ಆಗಿದೆ. ಕೀರ್ತಿ ಸಿಕ್ಕಾಯ್ತು, ಇನ್ನು ಮುಂದಾದ್ರೂ ಎಲ್ಲ ಒಳ್ಳೆಯದಾಗುತ್ತದೆ ಎಂದು ಅಂದುಕೊಂಡಿದ್ದೇ ಬಂತು ಹೊರತಾಗಿ ಇನ್ಯಾವ ಬದಲಾವಣೆ ಕೂಡ ಆಗಿಲ್ಲ. ಕೀರ್ತಿ ಮಲಗಿರುತ್ತಾಳೆ. ಮಲಗಿದ್ದಲ್ಲೇ ಸುಬ್ಬು ಅಂಕಲ್ ಎಂದು ಹೆಸರನ್ನು ಕನವರಿಸುತ್ತಾಳೆ. ಸುಬ್ಬು ಅಂಕಲ್ ಮುಂದಿನ ಪ್ರಶ್ನೆ ಕೇಳಿ ನಾನು ರೆಡಿ ಆಗ್ಬೇಕು ಎಂದು ಹೇಳುತ್ತಾಳೆ. ಅವಳು ಕನವರಿಸುತ್ತಿರುವುದನ್ನು ಕೇಳಿ ಲಕ್ಷ್ಮೀ ಹಾಗೂ ಕಾರುಣ್ಯ ಎಚ್ಚೆತ್ತುಕೊಳ್ಳುತ್ತಾಳೆ. ಕಾವೇರಿಗೆ ಸುಪ್ರಿತಾ ಮೇಲೆ ತುಂಬಾ ಕೋಪ ಬಂದಿರುತ್ತದೆ. “ನನ್ನ ಮಗಳ ಬಗ್ಗೆ ಸುಪ್ರಿತಾ ಏನೆಲ್ಲ ಹೇಳ್ತಾಳೆ ನೋಡು, ಕೀರ್ತಿಗೆ ಯಾವ ನಾಟಕವೂ ಬೇಕಾಗಿಲ್ಲ, ಅವಳು ಮೊದಲು ಹೀಗಿದ್ದವಳೂ ಅಲ್ಲ” ಎಂದು ಹೇಳುತ್ತಾಳೆ. ಆಗ ಲಕ್ಷ್ಮೀ “ಹೌದು ಆಂಟಿ ನನಗೆ ಎಲ್ಲ ಅರ್ಥ ಆಗುತ್ತೆ. ನಾನು ಯಾವಾಗಲೂ ಕೀರ್ತಿ ಮತ್ತು ನೀವು ಇಬ್ಬರ ಮಾತನ್ನೇ ನಂಬೋದು” ಎಂದು ಹೇಳುತ್ತಾಳೆ. ಆಗ ಕಾರುಣ್ಯಾಗೆ ಸಮಾಧಾನ ಆಗುತ್ತದೆ.