Latest Kannada Nation & World
ಈ ವಾರ ಚಿತ್ರಮಂದಿರಕ್ಕೆ ‘ದೇವರ’ ಜತೆಗೆ ಯಾರೆಲ್ಲ ಬರ್ತಿದ್ದಾರೆ? ಅದೃಷ್ಟ ಪರೀಕ್ಷೆಗಿಳಿದ ಇಬ್ಬರು ‘ಕಾಮಿಡಿ ಕಿಲಾಡಿಗಳು’

ಕಾಮಿಡಿ ಕಿಲಾಡಿಯ ಕೇದಾರ್ನಾಥ್ ಕುರಿಫಾರಂ
ಕಾಮಿಡಿ ಕಿಲಾಡಿಗಳು ಶೋ ಮೂಲಕ ಹಾಸ್ಯದ ಹೊನಲನ್ನು ಹರಿಸಿದ ನಟ ಮಡೆನೂರ್ ಮನು ನಾಯಕನಾಗಿ ನಟಿಸಿದ ಕೇದಾರ್ನಾಥ್ ಕುರಿಫಾರಂ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಜೆ.ಕೆ. ಮೂವೀಸ್ ಬ್ಯಾನರ್ನಲ್ಲಿ ಕೆ.ಎಂ ನಟರಾಜ್ ಈ ಸಿನಿಮಾ ನಿರ್ಮಿಸಿದ್ದಾರೆ. ಶೀನು ಸಾಗರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಗ್ರಾಮೀಣ ಸೊಗಡಿನ ಹಾಗೂ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ರಾಜೇಶ್ ಸಾಲುಂಡಿ ಕಥೆ, ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ನಿರ್ದೇಶಕ ಶೀನು ಸಾಗರ್ ಬರೆದಿದ್ದಾರೆ. ರಾಕೇಶ್ ತಿಲಕ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಸನ್ನಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮಡೆನೂರ್ ಮನು, ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಮುತ್ತು ಮುಂತಾದವರಿದ್ದಾರೆ.