Latest Kannada Nation & World
ಕಳ್ ನನ್ಮಕ್ಕಳ ಬಗ್ಗೆ ಮಾತನಾಡಲು ನಾನು ಬಂದಿಲ್ಲ; ದರ್ಶನ್ಗೆ ಜಾಮೀನು ಸಿಗ್ತಿದ್ದಂತೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ

Prakash Raj On Darshan: ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ನಟ ದರ್ಶನ್, ಬೆನ್ನು ಹುರಿ ಚಿಕಿತ್ಸೆ ಸಲುವಾಗಿ ಆರು ವಾರಗಳ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮಧ್ಯಂತರ ಜಾಮೀನಿನ ನಡುವೆಯೇ ನಿಟ್ಟುಸಿರು ಬಿಡುವಂಥ ಸುದ್ದಿ ಅವರಿಗೆ ಸಿಕ್ಕಿದೆ. ಅಂದರೆ, ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿಯೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದರ ಜತೆಗೆ ಸಿನಿಮಾರಂಗದ ಆಪ್ತರು ಸಹ ಶುಭ ಹಾರೈಸುತ್ತಿದ್ದಾರೆ. ಈ ನಡುವೆ ಬಹುಭಾಷಾ ನಟ ಪ್ರಕಾಶ್ ರಾಜ್ ದರ್ಶನ್ ಜಾಮೀನು ವಿಚಾರವನ್ನು ವ್ಯಂಗ್ಯವಾಡಿದ್ದಾರೆ.