Latest Kannada Nation & World

ಸಿದ್ದೇಗೌಡನನ್ನು ಚುನಾವಣೆಗೆ ನಿಲ್ಲಿಸುವಂತೆ ಕಾರ್ಯಕರ್ತರ ಮನವಿ, ಅತ್ತೆ ಬಳಿ ಚಾಡಿ ಹೇಳಿದ ನೀಲು; ಲಕ್ಷ್ಮೀ ನಿವಾಸ ಧಾರಾವಾಹಿ

Share This Post ????

ಸಿದ್ದೇಗೌಡನ ವಿರುದ್ಧ ಅತ್ತೆಗೆ ಚಾಡಿ ಹೇಳಿದ ನೀಲು

ಇತ್ತ ಜವರೇಗೌಡನಿಗೆ ಕರೆ ಮಾಡುವ ಪಕ್ಷದ ಕಾರ್ಯಕರ್ತರು, ಸಿದ್ದೇಗೌಡನನ್ನು ಯೂತ್‌ ಪ್ರೆಸಿಡೆಂಟ್‌ ಚುನಾವಣೆಗೆ ನಿಲ್ಲಿಸುವಂತೆ ಹೇಳುತ್ತಾರೆ. ಅದರೆ ಜವರೇಗೌಡ ಅದಕ್ಕೆ ಒಪ್ಪುವುದಿಲ್ಲ, ಅವನು ಮಾಡಿರುವ ಕೆಲಸಕ್ಕೆ ಅವನು ಖಂಡಿತ ಗೆಲ್ಲುವುದಿಲ್ಲ ಎನ್ನುತ್ತಾನೆ. ವಿಚಾರ ತಿಳಿದು ಮರೀಗೌಡ ಕೂಡಾ ಖುಷಿಯಾಗುತ್ತಾನೆ. ಆದರೆ ಇದು ನೀಲುಗೆ ಖುಷಿ ನೀಡುವುದಿಲ್ಲ. ಗಂಡ ಬೆಳೆಯಬೇಕು ಎಂದು ಆಸೆ ಪಡುತ್ತಿದ್ದರೆ, ಅವರಿಗೆ ಒಲಿದ ಎಲ್ಲಾ ಅವಕಾಶವನ್ನು ತಮ್ಮನಿಗೆ ಬಿಟ್ಟುಕೊಡುತ್ತಿದ್ದಾರೆ ಎಂದು ಬೇಸರಗೊಳ್ಳುತ್ತಾಳೆ. ಸಿದ್ದು ಚುನಾವಣೆಗೆ ನಿಂತು ಗೆದ್ದರೆ ಮಾವನಿಗೂ ಅವನ ಬಗ್ಗೆ ಖುಷಿಯಾಗುತ್ತದೆ, ಆಗ ಅವರು ಮನೆ ಬಿಟ್ಟು ಹೋಗಲು ಅವಕಾಶವಾಗುವುದಿಲ್ಲ, ಇಲ್ಲೇ ಉಳಿದುಕೊಳ್ತಾರೆ ಎಂದು ಅತ್ತೆ ಕಿವಿ ಚುಚ್ಚುತ್ತಾಳೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!