Latest Kannada Nation & World
ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಪಿಎಂ ಮೋದಿ

ನಮ್ಮ ಮೂರನೇ ಅವಧಿಯಲ್ಲಿ ನಾವು ಭಾರತದ ಎಲ್ಲರ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ. ನಾವು ಮಿಷನ್ ನಡೆಸುತ್ತಿದ್ದೇವೆ. ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆಯನ್ನು ದೇಶದ ಆರ್ಥಿಕ ಚಟುವಟಿಕೆಯ ಮಾರ್ಗಸೂಚಿಯ ಆಧಾರವೆಂದು ವಿವರಿಸಿದ ಮೋದಿ, ಈ ಅಧಿವೇಶನದಲ್ಲಿ ಅನೇಕ ಐತಿಹಾಸಿಕ ಮಸೂದೆಗಳನ್ನು ಎಂದಿನಂತೆ ಚರ್ಚಿಸಲಾಗುವುದು. ವಿಸ್ತೃತ ಚಿಂತನ ಮಂಥನದೊಂದಿಗೆ ಅವುಗಳನ್ನು ರಾಷ್ಟ್ರದ ಬಲವನ್ನು ಹೆಚ್ಚಿಸುವ ಕಾನೂನುಗಳನ್ನಾಗಿ ಜಾರಿಗೊಳಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.