‘ಗಟ್ಟಿಮೇಳ’ ಧಾರಾವಾಹಿ ನಟಿಗೆ ಕ್ಯಾನ್ಸರ್: ನನಗೆ ಕೆಲಸ ಸಿಗೋವಾಗ್ಲೇ ದೇವರು ಕಾಯಿಲೆ ಕೊಡ್ತಾನೆ ಎಂದ ಕಮಲಶ್ರೀ

ಕಲಾವಿದರಿಂದ ಸಹಾಯ
ʼಗಟ್ಟಿಮೇಳʼ ಧಾರಾವಾಹಿ ಮುಗಿಯುತ್ತಿದ್ದಂತೆ ನನಗೆ ಕ್ಯಾನ್ಸರ್ ಇರೋದು ಗೊತ್ತಾಯ್ತು. ನನ್ನಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುವಷ್ಟು ಹಣ ಇರಲಿಲ್ಲ. ಹೀಗಾಗಿ ನಾನು ಈ ಬಗ್ಗೆ ನಟಿ ಗಿರಿಜಾ ಲೋಕೇಶ್ ಅವರ ಜೊತೆ ಮಾತನಾಡಿದೆ. ಗಿರಿಜಾ ಅವರ ಸಲಹೆ ಮೇರೆಗೆ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದೆ. ಆಮೇಲೆ ನಟಿ ಉಮಾಶ್ರೀ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಿದರು. ಅದಕ್ಕೆ ಅವರೇ ಹಣ ಕೊಟ್ಟರು. ವೈದ್ಯರ ಬಳಿ ಕೂಡ ಉಮಾಶ್ರೀ ಮಾತನಾಡಿ, “ಬಡ ಕಲಾವಿದೆ, ಅವರ ಬಳಿ ಜಾಸ್ತಿ ಹಣ ತಗೋಬೇಡಿ, ನಾನು ಹಣ ಕೊಡ್ತೀನಿ. ಕಲಾವಿದರಾದ ಅವರನ್ನು ನಾವು ನೋಡಿಕೊಳ್ಳಬೇಕು ಎಂದಿದ್ದರು. ಗಿರಿಜಾ ಲೋಕೇಶ್, ಉಮಾಶ್ರೀ ಅವರು ಆಗಾಗ ಬ್ಯಾಂಕ್ಗೆ ಹಣ ಹಾಕುತ್ತಾರೆ. ಯಾರೋ ಪುಣ್ಯಾತ್ಮರು ಇಪ್ಪತ್ತೈದು ಕೆಜಿ ಅಕ್ಕಿ ತಂದುಕೊಟ್ಟರು. ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ, ಅನು ಪೂವಮ್ಮ, ಮೈಸೂರು ಮಾಲತಿ, ಪದ್ಮ, ವೀಣಾ ವೆಂಕಟೇಶ್ ಮುಂತಾದವರು ಹಣ ಸಹಾಯ ಮಾಡಿದ್ದಾರೆ, ದವಸ-ಧಾನ್ಯಗಳನ್ನು ತಂದುಕೊಟ್ಟಿದ್ದಾರೆ, ಹೀಗೆ ಜೀವನ ನಡೆಯುತ್ತಿದೆ ಎಂದು ಕಮಲಶ್ರೀ ಹೇಳಿದ್ದಾರೆ.