Latest Kannada Nation & World
ನಕಲಿ ಒಡವೆ ಕಂಡು ಕೂಗಾಡಿದ ಸಿಂಚನ; ಮನೆಯಲ್ಲಿ ಮತ್ತೊಂದು ರಹಸ್ಯ ಕ್ಯಾಮೆರಾ ಹುಡುಕಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸುವಾಗ, ಹರೀಶ್ ಮತ್ತು ಸಂತೋಷ್, ಶ್ರೀನಿವಾಸ್ ಅವರಲ್ಲಿ ರಾತ್ರಿ ಪಾಳಿಯ ವಿಚಾರ ತೆಗೆದಿದ್ದಾರೆ. ಅಪ್ಪ ಯಾಕೆ ರಾತ್ರಿ ಪಾಳಿ ಕೆಲಸ ಮಾಡಬೇಕು? ಅದರಲ್ಲೂ ಸೆಕ್ಯುರಿಟಿ ಗಾರ್ಡ್ ಕೆಲಸ ಯಾಕೆ ಬೇಕಿತ್ತು? ನಮ್ಮ ಮನೆಯ ಮತ್ತು ನಮ್ಮೆಲ್ಲರ ಮಾನ ಹರಾಜು ಹಾಕುತ್ತಿದ್ದೀರಿ, ಆಟೋ ಓಡಿಸಿದರೆ ಸಾಕಾಗುವುದಿಲ್ಲವೇ ಎಂದು ಕೇಳಿದ್ದಾರೆ. ಹರೀಶ್ ಕೂಡ, ಅಪ್ಪ ಹಾಗೆಲ್ಲಾ ರಾತ್ರಿ ಪಾಳಿ ಸೆಕ್ಯುರಿಟಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ, ನಮ್ಮ ಬೀಗರಿಗೆ ಗೊತ್ತಾದರೆ ಇನ್ನಷ್ಟು ಸಮಸ್ಯೆಯಾಗುತ್ತದೆ, ಅದಕ್ಕೆ ಅವಕಾಶ ಕೊಡಬೇಡಿ, ಬೇರೆ ಏನಾದರೂ ಕೆಲಸ ಮಾಡಿ ಎಂದು ಹೇಳಿ ಹೋಗುತ್ತಾನೆ. ಮಕ್ಕಳ ಮಾತು ಕೇಳಿ ಬೆಸರಪಟ್ಟುಕೊಂಡ ಶ್ರೀನಿವಾಸ್, ತಿಂಡಿ ತಿನ್ನದೇ ಹೊರಟುಹೋಗುತ್ತಾರೆ.