Latest Kannada Nation & World
ನಿಮ್ಮ ಸೊಸೆ ಈ ಮನೆಯ ಅದೃಷ್ಟ ದೇವತೆ, ಭಾವನಾ ಬಗ್ಗೆ ಗುರುಗಳು ಹೇಳಿದ ಮಾತು ಕೇಳಿ ಆಶ್ಚರ್ಯಗೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

ಮೋಸದಿಂದ ಮದುವೆ ಆದರೂ ಆ ಉದ್ದೇಶ ಒಳ್ಳೆಯದಾಗಿತ್ತು, ಮುಂದಿನ ದಿನಗಳಲ್ಲಿ ಖಂಡಿತ ಒಳ್ಳೆಯದಾಗುತ್ತದೆ. ಈ ಮಗುವಿನ ಮುಖದಲ್ಲಿ ದೈವಿ ಕಳೆ ಇದೆ. ಈ ಹುಡುಗಿ ಹುಟ್ಟಿದ್ದು, ಬೆಳೆದದ್ದು ಕಷ್ಟಗಳ ಮಡುವಿನಲ್ಲಾದರೂ ಕಾಲಿಟ್ಟ ಮನೆಗೆ ಕನಕಧಾರೆಯಾಗುತ್ತಾಳೆ. ಇವಳ ಬದುಕೆಲ್ಲಾ ಸೋಲು ಕಂಡಿದ್ದರೂ ಇವಳು ಹೋದ ಕಡೆ ಗೆಲುವಿನ ಬುತ್ತಿ, ಈಕೆ ನಿಮ್ಮ ಮನೆಗೆ ಅದೃಷ್ಟ ತಂದಿದ್ದಾಳೆ. ಇಂದು ನೀವು ಚುನಾವಣೆಯಲ್ಲಿ ಗೆಲ್ಲಲು ಇವಳೇ ಕಾರಣ, ನಿಮ್ಮ ಸೊಸೆಯ ಕಾಲು ಗುಣದಿಂದ ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗುತ್ತದೆ, ಒಂದು ವೇಳೆ ಇವಳು ಮನೆ ಬಿಟ್ಟು ಹೋದರೆ ಆ ಕ್ಷಣದಿಂದಲೇ ನಿಮ್ಮ ಮುಂದೆ ನತದೃಷ್ಟ ಬಂದು ನಿಲ್ಲುತ್ತೆ ಎಚ್ಚರ ಇದು ಸತ್ಯ ಎಂದು ಹೇಳಿ ಗುರುಗಳು ಮಾತನಾಡಿ ಅಲ್ಲಿಂದ ಹೊರಡುತ್ತಾರೆ.