Astrology

ಪಳ್ಳತ್ತಡ್ಕ ದಂಬೆಮೂಲೆಯಲ್ಲಿ ಕಾರ್ಯಾಡು ಕಾಲನಿಯ ನುರಿತರಿಂದ ಬುಟ್ಟಿ ತಯಾರಿ

Share This Post ????

ಮಧೂರು ಬ್ರಹ್ಮಕಲಶೋತ್ಸವಕ್ಕೆ ಪಳ್ಳತ್ತಡ್ಕ ದಂಬೆಮೂಲೆ ಬುಟ್ಟಿ

ಕಾರ್ಯಾಡು ಕಾಲನಿಯ ಬುಟ್ಟಿ ಹೆಣೆಯುವ ಕಾರ್ಮಿಕರ ಸಹಕಾರದಿಂದ ಕಳೆದ ಒಂದು ತಿಂಗಳ ಕಾಲ 400ಕ್ಕೂ ಅಧಿಕ ಬುಟ್ಟಿಗಳನ್ನು ತಯಾರಿಸಲಾಗಿತ್ತು. ಇದಕ್ಕಾಗಿ ವಿವಿಧ ಸ್ಥಳಗಳಿಂದ ಆಯ್ದ ಕಾಡುಬಳ್ಳಿಗಳನ್ನು ತಂದು ಉಪಯೋಗಿಸಲಾಗಿದೆ. ಹೆಣೆದ ಬುಟ್ಟಿಗಳನ್ನು ಬಿಸಿಲಿಗೆ ಒಣಗಿಸಿ, ವಾಹನದ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿಸಲಾಯಿತು. ಬುಟ್ಟಿಯೊಂದಕ್ಕೆ ರೂಪಾಯಿ 300ರಂತೆ ವೆಚ್ಚ ತಗುಲಿದ್ದು, ಅದನ್ನು ಭಗವದ್ಭಕ್ತರು ನಗದು ರೂಪದಲ್ಲಿ ನೀಡಿದ್ದರು. ನಾರಾಯಣ ಭಟ್ಟ ಎಂಬವರ ನೇತೃತ್ವದಲ್ಲಿ ಕಾರ್ಯಾಡು ಕಾಲನಿಯ ಬಟ್ಯ ಎಂಬವರ ಜೊತೆಯಲ್ಲಿ ಚೋಮು, ಚನಿಯ, ಕಮಲ, ಅಂಗಾರೆ, ಕಮಲ ಎಂಬ ಆರು ಮಂದಿ ನುರಿತ ಕಾರ್ಮಿಕರು ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಾಡಿನ ಅನೇಕ ಮಂದಿ ಈ ಬುಟ್ಟಿಗಳಿಗೆ ಪ್ರಾಯೋಜಕತ್ವ ವಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!