Latest Kannada Nation & World
ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ

ಬರುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಲತೀಫ್
ಭಾರತ ಮತ್ತು ಪಾಕಿಸ್ತಾನದ ಕಾರಣದಿಂದಾಗಿ ಐಸಿಸಿ ಅಸ್ತಿತ್ವದಲ್ಲಿದೆ. ಪಾಕಿಸ್ತಾನ ಸರ್ಕಾರವೂ ನಾವು ಆಡುವುದಿಲ್ಲ ಎಂದು ಹೇಳಿದರೆ, ಯಾರೂ ಪಂದ್ಯವನ್ನು ವೀಕ್ಷಿಸುವುದಿಲ್ಲ. ಒಂದು ವೇಳೆ ಅದೇ ನಡೆದರೆ ಐಸಿಸಿ ಯಾವುದಕ್ಕೂ ಪ್ರಯೋಜನ ಇಲ್ಲ ಎಂಬರ್ಥ ಎಂದು ರಶೀದ್ ಲತೀಫ್ ಹೇಳಿಕೆ ನೀಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ, ಪಾಕಿಸ್ತಾನಕ್ಕೆ ಬರದಿದ್ದರೆ, ಪಾಕಿಸ್ತಾನ ಕೂಡ ಟೂರ್ನಿ ಆಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಇತ್ತ ಭಾರತ ತಂಡವು ದ್ವಿಪಕ್ಷೀಯ ಪಂದ್ಯಗಳನ್ನು ಆಡಲು ಬಯಸುವುದಿಲ್ಲ. ಮತ್ತೊಂದೆಡೆ ಐಸಿಸಿ ಟೂರ್ನಿಗೂ ಬರುವುದಿಲ್ಲ ಎಂದರೆ ಹೇಗೆ? ಇದು ಐಸಿಸಿ ಟೂರ್ನಿ. ಬರುವುದಿಲ್ಲ ಎಂದು ಹೇಳುವಂತಿಲ್ಲ ಎಂದಿದ್ದಾರೆ.