Latest Kannada Nation & World
ಬಿಹಾರದ ಧ್ವನಿ ದೆಹಲಿ-ಬಂಗಾಳವನ್ನು ತಲುಪಬೇಕು; ಜನ ಸುರಾಜ್ ಪಕ್ಷ ಸ್ಥಾಪಿಸಿದ ಪ್ರಶಾಂತ್ ಕಿಶೋರ್

ನವದೆಹಲಿ: ರಾಜಕೀಯ ತಂತ್ರಜ್ಞ ಹಾಗೂ ಕಾರ್ಯಕರ್ತ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅಕ್ಟೋಬರ್ 2ರ ಬುಧವಾರ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತಮ್ಮ ರಾಜಕೀಯ ಪಕ್ಷವಾದ ಜನ ಸುರಾಜ್ ಪಕ್ಷವನ್ನು (Jan Suraaj Party) ಆರಂಭಿಸಿದ್ದಾರೆ. ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೂತನ ಪಕ್ಷದ ಮೂಲಕ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪಕ್ಷದ ಉದ್ಘಾಟನೆಗೂ ಮುನ್ನ, ನೆರೆದಿದ್ದ ಜನರಲ್ಲಿ ಜೈ ಬಿಹಾರ್ ಘೋಷಣೆಯನ್ನು ಮಾಡುವಂತೆ ಕಾರ್ಯಕ್ರಮದಲ್ಲಿ ಕೇಳಿಕೊಂಡರು. ಬಿಹಾರದ ಜನರನ್ನು ಯಾವೆಲ್ಲಾ ರಾಜ್ಯಗಳು ನಿಂದಿಸುತ್ತಿವೆಯೋ ಮತ್ತು ಅಂತಹ ಎಲ್ಲಾ ರಾಜ್ಯಗಳಿಗೆ ಈ ಕೂಗು ತಲುಪಲಿ ಎಂದರು.