Astrology
ಬಲಿಪಾಡ್ಯಮಿ ದಿನ ಆರಂಭವಾಗುವ ಕಾರ್ತಿಕ ಮಾಸದ ಮಹತ್ವವೇನು? ಗ್ರಹಗಳ ರಾಶಿ ಪ್ರವೇಶ ಸೇರಿ ಆಸಕ್ತಿಕರ ಮಾಹಿತಿ ಇಲ್ಲಿದೆ

ಏಕಾದಶಿಯಂದು ಉಪವಾಸ ಮಾಡಿ ಜಾಗರಣೆ ಮಾಡಬೇಕು. ಆ ನಂತರ ತುಳಸಿ ದಾಮೋದರ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಯಾರೇ ಮಾಡಿದರೂ ಅವರ ಪಾಪ ಕರ್ಮಗಳಿಂದ ಮುಕ್ತಿ ಪಡೆಯಬಹುದು ಎಂದು ನಾರದರು ಹೇಳುತ್ತಾರೆ. ಇದರಿಂದ ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸೂರ್ಯೋದಯದ ಮುಂಚೆ ಸ್ನಾನಾದಿಗಳನ್ನು ಮುಗಿಸಿ ಪೂಜೆಯಲ್ಲಿ ತೊಡಗಿದರೆ ಜೀವನದ ಕಷ್ಟ ನಷ್ಟಗಳು ದೂರವಾಗುತ್ತವೆ. ಈ ರೀತಿ ಕಾರ್ತಿಕಮಾಸದಲ್ಲಿನ ಧಾಮಿಕ ಆಚರಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ.