Astrology

ಮನಸ್ಸು ಆಗಾಗ ವಿಚಲಿತವಾಗುತ್ತಾ? ಮಾನಸಿಕವಾಗಿ ಬಲಿಷ್ಠರಾಗಲು ಭಗವದ್ಗೀತೆಯ ಈ ಸಂದೇಶಗಳನ್ನು ತಿಳಿಯಿರಿ

Share This Post ????

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಜೀವನ ಕಲೆಯನ್ನು ವಿವರಿಸಿದ್ದಾನೆ. ಗೀತಾ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿಯು ಮುಂದೊಂದು ದಿನ ಯಶಸ್ವಿಯಾಗುವುದು ಖಚಿತ. ತನ್ನ ಬಂಧುಗಳು, ಸಹೋದರರು ಮತ್ತು ಗುರುಗಳು ಶಸ್ತ್ರಸಜ್ಜಿತರಾಗಿ ಯುದ್ಧಭೂಮಿಯಲ್ಲಿ ಯುದ್ಧಕ್ಕೆ ಸಿದ್ದರಾಗಿದ್ದನ್ನು ಕಂಡು ಅರ್ಜುನನ ಮನೋಬಲ ಕುಗ್ಗತೊಡಗುತ್ತದೆ. ಆಗ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನು. ಶ್ರೀಕೃಷ್ಣನ ಮಾತುಗಳನ್ನು ಕೇಳಿ ಅರ್ಜುನನು ರಣರಂಗದಲ್ಲಿ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಜೀವನದ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆಯಲ್ಲಿ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಗೀತೆಯಲ್ಲಿ ಹೇಳಿರುವ ಉಪದೇಶಗಳು ಜನರಿಗೆ ಮಾರ್ಗದರ್ಶಿಯಾಗಿದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತವಾದ ನಮ್ಮ ಮನಸ್ಸನ್ನು ಶಾಂತಗೊಳಿಸುವ ಕೆಲವು ಉಪದೇಶಗಳು ಗೀತೆಯಲ್ಲಿವೆ. ಮನಸ್ಸು ವಿಚಲಿತಗೊಳ್ಳಲು ಪ್ರಾರಂಭಿಸಿದರೆ, ಭಗವದ್ಗೀತೆಯಲ್ಲಿ ಹೇಳಿರುವ ಉಪದೇಶಗಳನ್ನು ಮೊದಲು ಅರಿತುಕೊಳ್ಳಬೇಕು. ಮನಸ್ಸು ಆಗಾಗ ವಿಚಲಿತವಾಗುತ್ತಿದ್ದರೆ ಭಗವದ್ಗೀತೆಯಲ್ಲಿನ ಈ ಉಪದೇಶಗಳ ಬಗ್ಗೆ ಅರಿತುಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!