Latest Kannada Nation & World
ಟೈಗರ್ ರಾಬಿ ಮೇಲೆ ಹಲ್ಲೆಯಾಗಿದ್ದು ನಿಜವೇ? ಬ್ಲಾಂಗಾದೇಶ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯ ವೃತ್ತಿ ಬದುಕಿನ ಚಿತ್ರಣ ಇಲ್ಲಿದೆ

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮಳೆಯ ಕಾರಣ ಮೊದಲ ದಿನ ಸಂಪೂರ್ಣ ಆಟ ನಡೆಯಲಿಲ್ಲ. ಎರಡನೇ ದಿನ ಕೂಡ ಪಂದ್ಯ ತಡವಾಗಿದೆ. ಆದರೆ, ಮೊದಲ ದಿನ ಈ ಪಂದ್ಯದ ನಡುವೆ ದೊಡ್ಡ ನಾಟಕೀಯ ಬೆಳವಣಿಗೆ ಕಂಡುಬಂತು. ಬಾಂಗ್ಲಾದೇಶ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿ ಟೈಗರ್ ರೂಬಿ ಭಾರತೀಯ ಅಭಿಮಾನಿಗಳಿಂದ ಹಲ್ಲೆಗೊಳಗಾದರು ಎಂಬ ಸುದ್ದಿ ಮಿಂಚಿನಂತೆ ಸಂಚರಿಸಿತು. ಆದರೆ, ನಂತರ ಬಿಡುಗಡೆಯಾದ ವೀಡಿಯೊದಲ್ಲಿ, ಟೈಗರ್ ರೂಬಿ ಹಲ್ಲೆಯನ್ನು ನಿರಾಕರಿಸಿದರು. ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದಾರೆ. ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಇವರು ಪಂದ್ಯ ವೀಕ್ಷಣೆಗೆ ಹಾಜರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಂಚಲನ ಮೂಡಿಸಿರುವ ಈ ಟೈಗರ್ ರೂಬಿ ಯಾರು?, ಬಾಂಗ್ಲಾದೇಶದಲ್ಲಿ ಇವರು ಏನು ಕೆಲಸಮಾಡುತ್ತಾರೆ?.