Latest Kannada Nation & World
ವೆಂಕಿಯನ್ನು ಮನೆಯಿಂದ ಹೊರದಬ್ಬಲು ಸಂಚು ರೂಪಿಸುತ್ತಿರುವ ಹರೀಶ ಮತ್ತು ಸಂತೋಷ್: ಲಕ್ಷ್ಮೀ ನಿವಾಸ ಧಾರಾವಾಹಿ

ವೆಂಕಿಗೆ ಊಟ ಕೊಡದೇ ಸತಾಯಿಸಿದ ಮನೆಯವರು
ಮನೆಯಲ್ಲಿ ವೆಂಕಿ ತೀವ್ರ ಹಸಿವಿನಿಂದ ಕಂಗೆಟ್ಟು ಕುಳಿತಿದ್ದಾನೆ. ವೆಂಕಿಯ ಹೆಂಡತಿ, ತಟ್ಟೆ ಹಿಡಿದುಕೊಂಡು ಸಿಂಚನಾ ಬಳಿ ತೆರಳುತ್ತಾಳೆ. ಆದರೆ ಆಗ ಸಿಂಚನಾ ಅವಳಿಗೆ ಊಟ ನೀಡಲು ನಿರಾಕರಿಸುತ್ತಾಳೆ. ಅಲ್ಲದೆ, ಅವಮಾನ ಮಾಡಿ ಕಳುಹಿಸುತ್ತಾಳೆ. ಅತ್ತ, ವೀಣಾ ತಯಾರಿಸಿ ಇಟ್ಟಿದ್ದ ಅಡುಗೆಯನ್ನು ತಟ್ಟೆಗೆ ಬಡಿಸಿಕೊಳ್ಳಲು ವೆಂಕಿಯ ಹೆಂಡತಿ ಹೋಗುತ್ತಾಳೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಂತೋಷ್, ಊಟವನ್ನು ಮರಳಿ ಪಾತ್ರೆಗೆ ಹಾಕುತ್ತಾನೆ, ನಿಮಗೆ ಇಲ್ಲಿ ಊಟ ಕೊಡಲು ಸಾಧ್ಯವಿಲ್ಲ, ಕೂಡಲೇ ಮನೆಯಿಂದ ಹೊರಡಿ, ಮನೆಯಲ್ಲಿ ನೀವು ಇರುವುದು ಬೇಡ ಎಂದು ಹೇಳುತ್ತಾನೆ. ಹೀಗಾಗಿ ವೆಂಕಿಗೆ ಊಟ ದೊರೆಯುವುದಿಲ್ಲ, ಜತೆಗೆ ಮನೆಯಲ್ಲಿ ಚುಚ್ಚು ಮಾತುಗಳು ಅವನಿಗೆ ಸಂಕಟ ತರಿಸುತ್ತದೆ.