ಮುಸ್ಸಂಜೆಯ ಸಮಯ ಈ ಕೆಲಸಗಳನ್ನು ಮಾಡ್ತಾ ಇದ್ರೆ, ನಿಮ್ಮ ಕಷ್ಟಗಳಿಗೆ ನೀವೇ ಆಹ್ವಾನ ನೀಡಿದಂತೆ; ಇಂದೇ ಬದಲಿಸಿಕೊಳ್ಳಿ

ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ, ಮುಸ್ಸಂಜೆಯ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಮುಸ್ಸಂಜೆಯ ಸಮಯವು ಬಹಳ ಮಂಗಳಕರವಾದ ಸಮಯವಾಗಿದೆ. ಆ ಸಮಯದಲ್ಲಿ ದೇವತೆಗಳು ತಮ್ಮ ಸಂಚಾರವನ್ನು ಪ್ರಾರಂಭಿಸುತ್ತವೆ. ಲಕ್ಷ್ಮಿ ದೇವಿ ಮನೆಯೊಳಗೆ ಪ್ರವೇಶಿಸುವ ಸಮಯವೆಂದು ಹೇಳಲಾಗುತ್ತದೆ. ಆ ಸಮಯದಲ್ಲಿ ದೇವರ ಧ್ಯಾನ, ಪೂಜೆ, ಭಜನೆ, ದೀಪ – ಧೂಪಗಳನ್ನು ಬೆಳಗಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಮುಸ್ಸಂಜೆಯ ಸಮಯದಲ್ಲಿ ಮನೆಯ ಮುಂದಿನ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗಿ ಕೃಪೆಯನ್ನು ತೋರುತ್ತಾಳೆ ಎಂದು ನಂಬಲಾಗಿದೆ. ಮುಸ್ಸಂಜೆಯ ಸಮಯವನ್ನು ಬಹಳ ಸೂಕ್ಷ್ಮ ಸಮಯ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಹೇಗೆ ಒಳ್ಳೆಯ ಪ್ರಯೋಜನವಾಗುತ್ತದೆಯೊ ಅದೇ ರೀತಿ ಕೆಲವು ಕೆಲಸಗಳನ್ನು ಮಾಡುವುದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮುಸ್ಸಂಜೆಯ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಏಕೆ ಮಾಡಬಾರದು ಎಂದು ತಿಳಿಯೋಣ.