Latest Kannada Nation & World
ಒಂದು ಹದ್ದು ಒಂದು ತೋಳ; ರಾಜಕೀಯ ಪೈಪೋಟಿಯಲ್ಲಿ ಗೆಲುವು ಯಾರದ್ದು?

ಆ ನಂತರ ವಿರೋಧ ಪಕ್ಷದಲ್ಲಿರುವ ಉಗ್ರಂ ಮಂಜು ಅವರು ತಾನು ಹದ್ದುವನ್ನು ಆದರ್ಶವಾಗಿಸಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಹದ್ದು ತುಂಬಾ ಸಾಮರ್ಥ್ಯ, ಸೂಕ್ಷಮತೆ, ತೀಕ್ಷಣತೆ, ಗುರಿ ಇವೆಲ್ಲವನ್ನೂ ಹೊಂದಿದೆ ಆದ್ದರಿಂದ ಆ ಪಕ್ಷಿಯೇ ಚೆನ್ನಾಗಿ ಬೇಟೆಯಾಡುತ್ತದೆ ಎಂದು ಹೇಳುತ್ತಾರೆ. ಹೀಗೆ ಮನೆಯೊಳಗಿನ ಎರಡು ಬೇರೆ ಬೇರೆ ಪಕ್ಷಗಳ ಗುರಿ ನಿರ್ಧಾರವಾಗುತ್ತಿದೆ. ಈ ಪ್ರೋಮೋ ಬಿಡುಗಡೆಯಾದ ನಂತರ ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ರಾಜಕೀಯ ದೊಂಬರಾಟದ ಮಧ್ಯೆ ಜಗದೀಶ್ CM ಆಗಿ ಬಂದ್ರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಈಗಲೂ ಜಗದೀಶ್ ಅವರು ಈ ಮನೆಗೆ ಬರಬೇಕು ಎಂದೇ ಹೇಳುತ್ತಿದ್ದಾರೆ.