Latest Kannada Nation & World
ಹನುಮಂತನಿಗೆ ‘ದೋಸ್ತಾ ನೀ ನನ್ನ ಪ್ರಾಣ ಕಣೋ’ ಎನ್ನುತ್ತಲೇ ಬಿಗ್ ಬಾಸ್ನಿಂದ ಆಚೆ ಬಂದ ಧನರಾಜ್ ಆಚಾರ್

ಈ ವಾರ ಮನೆಯಿಂದ ಹೊರಹೋಗಲು, ಗೌತಮಿ ಜಾಧವ್, ಉಗ್ರಂ ಮಂಜು, ರಜತ್, ಧನರಾಜ್ ಮತ್ತು ಭವ್ಯಾ ಗೌಡ ನಾಮಿನೇಟ್ ಆಗಿದ್ದರು. ಆ ಪೈಕಿ ಡಬಲ್ ಎಲಿಮಿನೇಷನ್ ಮುಗಿದಿದೆ. ಶನಿವಾರ ಗೌತಮಿ ಜಾಧವ್ ಮನೆಯಿಂದ ಆಚೆ ಬಂದಿದ್ದರೆ, ಭಾನುವಾರ ಧನರಾಜ್ ಆಚಾರ್ ಬೇಸರದಲ್ಲಿಯೇ ಎಲಿಮಿನೇಟ್ ಆಗಿದ್ದರು. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ ಅದಾಗಲೇ ಫಿನಾಲೆ ರೇಸ್ನಲ್ಲಿದ್ದರು. ಇವರುಗಳ ಜತೆಗೆ ಮಂಜು, ಭವ್ಯ, ರಜತ್ ಸೇರಿಕೊಂಡು ಒಟ್ಟು ಆರು ಮಂದಿ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿರಿಸಿದ್ದಾರೆ.