Latest Kannada Nation & World
ಹನುಮನ ಕೃಪಾಕಟಾಕ್ಷ, ಫಿನಾಲೆ ವಾರ ತಲುಪಿದ ಮೋಕ್ಷಿತಾ ಪೈ; ಯಾರ ಪಾಲಿಗೆ ಡಬಲ್ ಎಲಿಮಿನೇಷನ್ ಉರುಳು?

ಹನುಮನ ಕೃಪೆಯಿಂದ ಸೇವ್ ಆದ ಮೋಕ್ಷಿತಾ
ಈ ನಡುವೆ ಈಗಾಗಲೇ ಫಿನಾಲೆ ವಾರದಲ್ಲಿ ಕೂತ ಹನುಮಂತನಿಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿದರು. ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್, ರಜತ್, ಮೋಕ್ಷಿತಾ ಪೈ ಮತ್ತು ಧನರಾಜ್ ಆಚಾರ್ ಪೈಕಿ ಒಬ್ಬರನ್ನು ಸೇವ್ ಮಾಡಬೇಕು ಎಂದರು. ಅದರಲ್ಲಿ ಮೋಕ್ಷಿತಾ ಅವರನ್ನು ಸೇವ್ ಮಾಡಿ, ಫಿನಾಲೆ ವಾರಕ್ಕೆ ಕರೆದೊಯ್ದರು. ಬಹುತೇಕರು ಧನರಾಜ್ ಅವರನ್ನು ಹನುಮಂತು ಸೇವ್ ಮಾಡಬಹುದು ಎಂದೇ ಭಾವಿಸಿದ್ದರು. ಆದರೆ, ಟಾಸ್ಕ್ ವೇಳೆ ಆದ ತಪ್ಪನ್ನು ತಲೆಯಲ್ಲಿಟ್ಟುಕೊಂಡು, ಧನರಾಜ್ ಅವರನ್ನು ಹನುಮಂತು ಆಯ್ಕೆ ಮಾಡಲಿಲ್ಲ.