Latest Kannada Nation & World
ತಾಯಿಯ ಅಗಲಿಕೆ; ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮಧ್ಯದಲ್ಲೇ ಟೀಮ್ ಇಂಡಿಯಾ ಕ್ಯಾಂಪ್ ತೊರೆದ ಮ್ಯಾನೇಜರ್

ಒಂದೆಡೆ ಭಾರತ ಕ್ರಿಕೆಟ್ ತಂಡವು ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ (ICC Champions Trophy) ಪಂದ್ಯಗಳಲ್ಲಿ ನಿರತವಾಗಿದೆ. ಭಾನುವಾರ (ಮಾ.2) ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಆದರೆ, ಅದರ ನಡುವೆ ಟೀಮ್ ಇಂಡಿಯಾ ಶಿಬಿರದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಭಾರತ ತಂಡದ ಮ್ಯಾನೇಜರ್ ಆಗಿರುವ ಆರ್ ದೇವರಾಜ್, ಭಾನುವಾರ ಬೆಳಗ್ಗೆ ತಮ್ಮ ತಾಯಿಯ ನಿಧನವಾದ ನಂತರ ದುಬೈನಿಂದ ತಂಡವನ್ನು ತೊರೆದು ಭಾರತಕ್ಕೆ ಮರಳಿದ್ದಾರೆ. ಸುದ್ದಿ ತಿಳಿದ ದೇವರಾಜ್, ತಕ್ಷಣವೇ ತಮ್ಮ ಕುಟುಂಬದೊಂದಿಗೆ ಸೇರಲು ನಿರ್ಧರಿಸಿ ಹೈದರಾಬಾದ್ಗೆ ತೆರಳಿದ್ದಾರೆ.