Latest Kannada Nation & World
CSP ಪಾತ್ರದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಾ ಟಿ ಎನ್ ಸೀತಾರಾಮ್? ಪರಮೇಶ್ವರ್ ಗುಂಡ್ಕಲ್ ನೇತೃತ್ವದಲ್ಲಿ ಹೊಸ ಧಾರಾವಾಹಿ

ಟಿ ಎನ್ ಸೀತಾರಾಮ್ ಅವರ ಧಾರಾವಾಹಿಯನ್ನು ನೋಡಲು ಜನರು ಕಾತದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಜನರಿಗೆ ಅವರು ಈ ಹಿಂದೆ ಮಾಡಿದ ಧಾರಾವಾಹಿಗಳು ತುಂಬಾ ಇಷ್ಟವಾಗಿದೆ. ಅವರನ್ನು ಲಾಯರ್ ಆಗಿ ನೋಡಲು ಎಷ್ಟೋ ಜನ ಇಷ್ಟಪಡುತ್ತಾರೆ. ಮುಕ್ತ, ಮುಕ್ತ ಧಾರಾವಾಹಿಗಳ ಸಿರೀಸ್ ಎಷ್ಟೋ ಜನರ ಮನಸಿನಲ್ಲಿ ಇನ್ನೂ ಸಹ ಅಚ್ಚೊತ್ತಿದೆ. ಅವರ ಮಾತು, ಅವರ ಅಭಿನಯ ಹಾಗೂ ಕಥೆಯಲ್ಲಿನ ಗಟ್ಟಿತನ ಅವರನ್ನು ಜನರು ಇಷ್ಟಪಡುವಂತೆ ಮಾಡಿದೆ. ಆದರೆ ಇತ್ತೀಚಿನ ಧಾರಾವಾಹಿಗಳಲ್ಲಿ ಅವರ ಧಾರಾವಾಹಿಯಲ್ಲಿದ್ದಷ್ಟು ಸತ್ವ ಇಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಅವರನ್ನು ಮತ್ತೆ ಕಿರುತೆರೆಯಲ್ಲಿ ಕಾಣಬೇಕು ಎಂಬ ಹಂಬಲ ಸಾಕಷ್ಟು ಜನಕ್ಕಿತ್ತು.