Latest Kannada Nation & World
ತಾಯವ್ವನ ಕೋಪಕ್ಕೆ ಬಲಿಯಾದ ಜೋಡಿ, ಹೆಂಡತಿ ಭಾವನಾ ಜೊತೆ ಮನೆ ಬಿಟ್ಟು ಹೊರಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ

ಭಾವನಾ ಕುಟುಂಬದಲ್ಲಿ ಅವಳ ಹೋರಾಟದ ವಿಚಾರ ಚರ್ಚೆ
ಸದ್ಯಕ್ಕೆ ಅವಳ ನಾಟಕ ಮುಗಿದರೆ ಸಾಕು, ಅವಳು ಕೊಟ್ಟ ದೂರನ್ನು ತೆಗೆದುಕೋ, ಮುಂದೆ ನೋಡೋಣ ಎಂದು ತಾಯವ್ವ, ಇನ್ಸ್ಪೆಕ್ಟರ್ಗೆ ಸೂಚಿಸುತ್ತಾಳೆ. ಅದರಂತೆ ಭಾವನಾ ಕೊಟ್ಟ ದೂರಿನ ಪ್ರತಿಯನ್ನು ಇನ್ಸ್ಪೆಕ್ಟರ್ ಪಡೆಯುತ್ತಾರೆ, ಅವರಿಗೆ ಧನ್ಯವಾದ ಹೇಳಿ ಇಬ್ಬರೂ ಅಲ್ಲಿಂದ ಹೊರಡುತ್ತಾರೆ. ಭಾವನಾ ಮಾಡಿದ ಹೋರಾಟ ಅವಳ ಕುಟುಂಬದಲ್ಲಿ ಸದ್ದು ಮಾಡಲು ಶುರುವಾಗಿದೆ, ಜಯಂತ್ ಕೂಡಾ ಅವಳನ್ನು ಟಿವಿಯಲ್ಲಿ ನೋಡಿ, ಭಾವನಾಗೆ ಇದು ಬೇಕಿತ್ತಾ ಎಂದು ಜಾನು ಬಳಿ ಕೇಳುತ್ತಾನೆ, ಹೌದು ಖಂಡಿತ ಬೇಕು, ಅವಳು ಆ ಮಗುವಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾಳೆ. ನನಗೆ ಹುಟ್ಟುವ ಮಗು ಕೂಡಾ ಧೈರ್ಯವಂತನಾಗಬೇಕು, ಯಾವುದನ್ನೂ ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಬಾರದು ಎನ್ನುತ್ತಾಳೆ. ಇವಳು ನನ್ನ ಬಗ್ಗೆಯೇ ಹೇಳುತ್ತಿರಬಹುದಾ ಎಂದು ಜಯಂತ್ ಮನಸ್ಸಿನಲ್ಲಿ ಯೋಚಿಸುತ್ತಾನೆ.