Latest Kannada Nation & World

ಅಮರನ್‌ ಸಿನಿಮಾದಲ್ಲಿ ಮಹಾಪ್ರಮಾದ, ಸಾಯಿ ಪಲ್ಲವಿ ಎಂದು ವಿದ್ಯಾರ್ಥಿಗೆ ಕರೆಗಳ ಸುರಿಮಳೆ, 1.1 ಕೋಟಿ ರೂ ಪರಿಹಾರಕ್ಕೆ ಆಗ್ರಹ

Share This Post ????

Amaran Movie: ಚೆನ್ನೈನ ಎಂಜಿನಿಯರ್‌ ವಿದ್ಯಾರ್ಥಿಯೊಬ್ಬ ಅಮರನ್‌ ಚಿತ್ರತಂಡದ ವಿರುದ್ಧ ದೂರು ದಾಖಲಿಸಿ, 1.1 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾನೆ. ಇಷ್ಟಕ್ಕೂ ಆಗಿದ್ದೇನೆಂದರೆ, ಆ ವಿದ್ಯಾರ್ಥಿಗೆ ಸಾಯಿ ಪಲ್ಲವಿ ಅಭಿಮಾನಿಗಳು ಫೋನ್‌ ಮಾಡುತ್ತಿದ್ದಾರಂತೆ. ಒಂದಲ್ಲ ಎರಡಲ್ಲ, ಅಸಂಖ್ಯಾತ ಕರೆಗಳನ್ನು ಸ್ವೀಕರಿಸಿ ಸುಸ್ತಾದ ಆ ವಿದ್ಯಾರ್ಥಿ ದೂರು ದಾಖಲಿಸಿ ಮಾನಸಿಕ ಕಿರಿಕಿರಿಗೆ ಪರಿಹಾರವಾಗಿ 1.1 ಕೋಟಿ ರೂಪಾಯಿ ನೀಡಬೇಕೆಂದು ಕೇಳಿದ್ದಾನೆ. ಇದಕ್ಕೆಲ್ಲ ಕಾರಣವಾಗಿರುವುದು ಅನಿಮಲ್‌ ಸಿನಿಮಾದಲ್ಲಿ ಕಾಣಿಸಿದ ಒಂದು ಮೊಬೈಲ್‌ ನಂಬರ್‌. ಅನಿಮಲ್‌ ಸಿನಿಮಾದಲ್ಲಿ ಚಿತ್ರದ ನಾಯಕಿಯ ಫೋನ್‌ ನಂಬರ್‌ ಎಂದು ಸಾಂಕೇತಿಕವಾಗಿ ನೀಡಲಾದ ನಂಬರ್‌ ನಿಜವಾಗಿಯೂ ಚೆನ್ನೈನ ವಿದ್ಯಾರ್ಥಿಯ ನಂಬರ್‌ ಆಗಿತ್ತು. ಅಕ್ಟೋಬರ್ 31 ರಂದು ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ರೀತಿ ಫೋನ್‌ ಕರೆಗಳು ಬರಲು ಆರಂಭವಾಗಿವೆ. ಇದರಿಂದ ಅಪಾರ ಮಾನಸಿಕ ಕಿರಿಕಿರಿ ಅನುಭವಿಸಿದ್ದು, ನನಗೆ ಪರಿಹಾರ ನೀಡಬೇಕು ಎಂದು ದಾವೆ ಹೂಡಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!