Latest Kannada Nation & World
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗೌತಮ್ ಗಂಭೀರ್ ಭಾರತ ತಂಡದ ಹೆಡ್ಕೋಚ್ ಅಲ್ಲ; ನ್ಯೂಜಿಲೆಂಡ್ ವಿರುದ್ದ ಸರಣಿ ಸೋತಿದ್ದಕ್ಕೆ ಈ ಶಿಕ್ಷೆಯೇ?

ಲಕ್ಷ್ಮಣ್ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಇತರ ಸದಸ್ಯರಾದ ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಶುಭದೀಪ್ ಘೋಷ್ ಅವರು ಕೂಡ ಪ್ರಯಾಣ ಬೆಳೆಸಲಿದ್ದಾರೆ. ಈ ಮೂವರು ಇತ್ತೀಚೆಗೆ ಒಮಾನ್ನಲ್ಲಿ ನಡೆದ ಏಷ್ಯಾ ಎಮರ್ಜಿಂಗ್ ಕಪ್ ಟೂರ್ನಿಯಲ್ಲಿ ಭಾರತದ ಕೋಚ್ಗಳಾಗಿ ಸೇವೆ ಸಲ್ಲಿಸಿದ್ದರು. ಟಿ20 ಸರಣಿಯು ಕ್ರಮವಾಗಿ ನವೆಂಬರ್ 8, 10, 13, 15 ರಂದು ಡರ್ಬನ್, ಗ್ಕೆಬರ್ಹಾ, ಸೆಂಚೂರಿಯನ್ ಮತ್ತು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ನವೆಂಬರ್ 4ರಂದು ಭಾರತ ತಂಡ ಡರ್ಬನ್ ಗೆ ತೆರಳಲಿದೆ.