Latest Kannada Nation & World
ಮನೆಯವರ ಮಾತು ಧಿಕ್ಕರಿಸಿ ಶ್ರಾವಣಿಯನ್ನು ಮನೆಗೆ ಸೇರಿಸಿಕೊಂಡ ಪದ್ಮನಾಭ, ಸುಬ್ಬು ಮೇಲೆ ದ್ವೇಷ ಕಾರುತ್ತಿರುವ ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ

ಶ್ರಾವಣಿ ಬಗ್ಗೆ ಕೋಪ ಹೊರ ಹಾಕುವ ವಿಶಾಲಾಕ್ಷಿ
ಶ್ರಾವಣಿಯಿಂದಾಗಿ ತನ್ನ ಮಗಳ ಹಾಳು ಹಾಳಾಯ್ತು ಎಂದು ಕೋಪಗೊಂಡಿರುವ ವಿಶಾಲಾಕ್ಷಿ ಶ್ರಾವಣಿ ಬಗ್ಗೆ ಬಾಯಿಗೆ ಬಂದಿದ್ದು ಮಾತನಾಡುತ್ತಾಳೆ. ಶ್ರಾವಣಿಗೆ ಬಯ್ಯುತ್ತಾ ಕೋಪ ಹೊರ ಹಾಕುವ ವಿಶಾಲಾಕ್ಷಿ, ಧನಲಕ್ಷ್ಮೀ ಸುಬ್ಬು ಮೇಲೂ ಕೋಪ ತೋರುತ್ತಾರೆ. ಯಾವುದೇ ಕಾರಣಕ್ಕೂ ಶ್ರಾವಣಿಯನ್ನು ಈ ಮನೆಗೆ ಸೇರಿಸುವುದಿಲ್ಲ ಎಂದು ವಿಶಾಲಾಕ್ಷಿ ಹೇಳುವಾಗ ಮಧ್ಯೆ ಮಾತನಾಡುವ ಕಾಂತಮ್ಮ ‘ಅಲ್ವೇ ವಿಶಾಲು, ನಿನ್ನ ಮಗಳಿಗೆ ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಆಗಬೇಕು, ಆದರೆ ಶ್ರಾವಣಿ ಮೇಡಂ ಮಾತ್ರ ಆಗಬಾರದಾ‘ ಎಂದು ಅವಳ ಪರ ವಹಿಸಿ ಮಾತನಾಡುತ್ತಾಳೆ. ಆದರೆ ಕಾಂತಮ್ಮ ಮಾತು ಯಾರಿಗೂ ಸಮಜಾಯಿಸಿ ನೀಡುವುದಿಲ್ಲ. ಅಷ್ಟೊತ್ತಿಗೆ ಮನೆ ಮುಂದೆ ಬಂದು ನಿಲ್ಲುತ್ತಾರೆ ಪದ್ಮನಾಭ, ಶ್ರಾವಣಿ, ಸುಬ್ಬು.