Latest Kannada Nation & World
ಶ್ರೇಷ್ಠಾಳನ್ನು ಎತ್ತಲು ಹೋಗಿ ಸೊಂಟ ಉಳುಕಿಸಿಕೊಂಡ ತಾಂಡವ್, ಅನಾಮಿಕ ಅತಿಥಿಗೆ ಭಾಗ್ಯಾಳಿಂದ ಶಾಖ ಚಿಕಿತ್ಸೆ; ಭಾಗ್ಯಲಕ್ಷ್ಮೀ ಧಾರಾವಾಹಿ

ಸಹನಾ, ಉಪ್ಪು ಬಿಸಿನೀರು ಹಿಡಿದು ಶ್ರೇಷ್ಠಾ-ತಾಂಡವ್ ಉಳಿದುಕೊಂಡ ರೂಮ್ಗೆ ಬರುತ್ತಾಳೆ. ಉಪ್ಪು ಬಿಸಿ ನೀರು ನೋಡಿ ತಾಂಡವ್ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನನ್ನ ಅಮ್ಮ ಕೂಡಾ ನನಗೆ ಇದೇ ಚಿಕಿತ್ಸೆ ಕೊಡುತ್ತಿದ್ದರು. ಆಗ ನನಗೆ ಬೇಗ ಗುಣಮುಖವಾಗುತ್ತಿತ್ತು ಎನ್ನುತ್ತಾನೆ. ನೀವು ಥ್ಯಾಂಕ್ಸ್ ಹೇಳಬೇಕಾಗಿದ್ದು ನನಗಲ್ಲ, ನಮ್ಮ ಬಾಸ್ಗೆ ಎಂದು ಸಹನಾ ಹೇಳುತ್ತಾಳೆ. ಶ್ರೇಷ್ಠಾ, ತಾಂಡವ್ಗೆ ಉಪ್ಪು ಬಿಸಿನೀರಿನಿಂದ ಶಾಖ ಕೊಡುತ್ತಾಳೆ. ಇದರಿಂದ ತಾಂಡವ್ ರಿಲೀಫ್ ಆಗುತ್ತಾನೆ. ಅದನ್ನು ಹೆಂಡತಿ ಭಾಗ್ಯಾ ಕಳಿಸಿದ್ದು ಅನ್ನೋದು ಗೊತ್ತಿಲ್ಲದೆ, ಯಾರೋ ಆ ಪುಣ್ಯಾತ್ಮರು ಅವರಿಂದ ನನಗೆ ನೋವು ಕಡಿಮೆ ಆಯ್ತು ಎನ್ನುತ್ತಾನೆ. ಲ್ಯಾಪ್ಟಾಪ್ ತೆಗೆದುಕೊಂಡು ಆಫೀಸ್ ಮೀಟಿಂಗ್ಗೆ ಹೊರಡುವ ತಾಂಡವ್ನನ್ನು ಶ್ರೇಷ್ಠಾ ತಡೆಯುತ್ತಾಳೆ. ಆಫೀಸ್ ಕೆಲಸ ಬಿಟ್ಟು ನೀನು ನನ್ನ ಜೊತೆ ಸಮಯ ಕಳೆಯಬೇಕು ಎಂದು ಶ್ರೇಷ್ಠಾ ತಾಕೀತು ಮಾಡುತ್ತಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ.