Astrology
ಸುಬ್ರಹ್ಮಣ್ಯ ಸ್ವಾಮಿಗೂ ಹಾವುಗಳಿಗೂ ಏನು ಸಂಬಂಧ? ಷಣ್ಮುಖನ ಪೂಜೆ ಸಂದರ್ಭ ಸರ್ಪಗಳಿಗೆ ಯಾಕಿಷ್ಟು ಮಹತ್ವ

ಶಿವನ ಮಗ ಸುಬ್ರಹ್ಮಣ್ಯನನ್ನು ಕಾರ್ತಿಕೇಯ ಅಥವಾ ಮುರುಗನ್ ಎಂದೂ ಕರೆಯುತ್ತಾರೆ. ಪುರಾಣಗಳ ಪ್ರಕಾರ, ಸುಬ್ರಹ್ಮಣ್ಯ ಸ್ವಾಮಿಯನ್ನು ಯುದ್ಧ ಮತ್ತು ಶಕ್ತಿಯ ದೇವರು ಎಂದು ಪರಿಗಣಿಸಲಾಗುತ್ತದೆ, ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ದೊರಕುತ್ತದೆ, ಶಕ್ತಿ ಹೆಚ್ಚುತ್ತದೆ, ಸರ್ಪದೋಷಗಳು ಹೋಗುತ್ತವೆ ಎಂದು ಹೇಲಲಾಗುತ್ತದೆ. ಸುಬ್ರಹ್ಮಣ್ಯ ಮತ್ತು ಹಾವುಗಳ ನಡುವಿನ ಸಂಬಂಧವೇನು ಮತ್ತು ಸುಬ್ರಹ್ಮಣ್ಯ ದೇವರ ಆರಾಧನೆಯಲ್ಲಿ ಸರ್ಪಗಳು ಏಕೆ ಮುಖ್ಯವಾಗಿವೆ? ಕುಮಾರಸ್ವಾಮಿಯನ್ನು ಪೂಜಿಸುವುದರಿಂದ ಸರ್ಪದೋಷ ನಿವಾರಣೆಯಾಗುತ್ತದೆ ಎಂಬುದಕ್ಕೆ ಆಧ್ಯಾತ್ಮಿಕ ಶಾಸ್ತ್ರಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.