Latest Kannada Nation & World
‘ಅಹ್ಮದ್’ಗಳ ಅಬ್ಬರ, ಋತುರಾಜ್, ರಚಿನ್ ಸಮಯೋಚಿತ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈಗೆ ಸೂಪರ್ ಗೆಲುವು

ನೂರ್ ಅಹ್ಮದ್ (18/4), ಖಲೀಲ್ ಅಹ್ಮದ್ (29/3) ಕಟ್ಟುನಿಟ್ಟಾದ ಬೌಲಿಂಗ್ ದಾಳಿಯ ಜೊತೆಗೆ ಋತುರಾಜ್ ಗಾಯಕ್ವಾಡ್ (53), ರಚಿನ್ ರವೀಂದ್ರ (65*) ಅವರ ಸಮಯೋಚಿತ ಅರ್ಧಶತಕಗಳ ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮತ್ತೊಂದೆಡೆ ಕಳೆದ ವರ್ಷ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಮುಂಬೈ ಪರ 3 ವಿಕೆಟ್ ಉರುಳಿಸಿ ಪಂದ್ಯದ ದಿಕ್ಕು ಬದಲಿಸಲು ಯತ್ನಿಸಿದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಹೋರಾಟ ವ್ಯರ್ಥವಾಯಿತು. ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.