Latest Kannada Nation & World

ಆರ್​ಸಿಬಿ ಮಾಜಿ ಆಟಗಾರ ಮಿಂಚು, ಮುಂಬೈಗೆ ಮತ್ತೊಂದು ಭರ್ಜರಿ ಜಯ; ದಾಖಲೆಯ ಚೇಸ್ ಮಾಡಿದ್ದ ಎಸ್​ಆರ್​ಹೆಚ್​ಗೆ ಏನಾಯ್ತು?

Share This Post ????

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಜರುಗಿದ 18ನೇ ಆವೃತ್ತಿಯ ಐಪಿಎಲ್​ನ 33ನೇ ಪಂದ್ಯದಲ್ಲಿ ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್, 4 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಭರ್ಜರಿ ಜಯ; ದಾಖಲೆಯ ಚೇಸ್ ಮಾಡಿದ್ದ ಎಸ್​ಆರ್​ಹೆಚ್​ಗೆ ಏನಾಯ್ತು?

ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಭರ್ಜರಿ ಜಯ; ದಾಖಲೆಯ ಚೇಸ್ ಮಾಡಿದ್ದ ಎಸ್​ಆರ್​ಹೆಚ್​ಗೆ ಏನಾಯ್ತು? (AFP)

2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನ 33ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಹೋರಾಟ ನೀಡಿದ ಮುಂಬೈ ಇಂಡಿಯನ್ಸ್​ ಸತತ 2ನೇ ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ದಾಖಲೆ ರನ್ ಚೇಸ್ ಮಾಡಿದ್ದ ಸನ್​ರೈಸರ್ಸ್​ ಹೈದರಾಬಾದ್ 5ನೇ ಸೋಲಿಗೆ ಶರಣಾಗಿದ್ದು, ಅಂಕಪಟ್ಟಿಯಲ್ಲಿ9 ಸ್ಥಾನದಲ್ಲಿದೆ. ಮತ್ತೊಂದೆಡೆ ಮೂರನೇ ಜಯದ ನಗೆ ಬೀರಿದ ಎಂಐ, 7ನೇ ಸ್ಥಾನದಲ್ಲಿದೆ.

ಮುಂಬೈನ ಐಕಾನಿಕ್ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್, ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಅಭಿಷೇಕ್ ಶರ್ಮಾ 40 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಮುಂಬೈ, 18.1 ಓವರ್​​ಗಳಲ್ಲಿ 4 ವಿಕೆಟ್​​ಗೆ ಜಯದ ನಗೆ ಬೀರಿತು. ಇದು ಮುಂಬೈನ ಸತತ 2ನೇ ಗೆಲುವು. ಬೌಲಿಂಗ್​ನಲ್ಲಿ ಪ್ರಮುಖ 2 ವಿಕೆಟ್ ಉರುಳಿಸಿದ ವಿಲ್ ಜಾಕ್ಸ್​ ಬ್ಯಾಟಿಂಗ್​ನಲ್ಲಿ 36 ರನ್ ಗಳಿಸಿ ಪ್ರಮುಖ ಪಾತ್ರವಹಿಸಿದರು.

ಆರ್​​ಸಿಬಿ ಮಾಜಿ ಆಟಗಾರ ಅಬ್ಬರ

ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದ ವಿಲ್ ಜಾಕ್ಸ್​ ಕೊನೆಗೂ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಪಂದ್ಯಗಳಲ್ಲಿ ಅವಕಾಶ ಸಿಕ್ಕರೂ ವೈಫಲ್ಯ ಅನುಭವಿಸಿದ್ದ ಆರ್​ಸಿಬಿ ಮಾಜಿ ಆಟಗಾರ ಇದೀಗ ಎಸ್​ಆರ್​ಹೆಚ್ ವಿರುದ್ಧ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಧಮಾಕ ಸೃಷ್ಟಿಸಿದ್ದಾರೆ. 3 ಓವರ್​ ಬೌಲಿಂಗ್ ಮಾಡಿದ ವಿಲ್ ಜಾಕ್ಸ್, ಕೇವಲ 14 ರನ್ ಬಿಟ್ಟುಕೊಟ್ಟು ಟ್ರಾವಿಸ್ ಹೆಡ್ ಮತ್ತು ಇಶಾನ್ ಕಿಶನ್​ರನ್ನು ಔಟ್ ಮಾಡಿದ್ದಾರೆ. ಬ್ಯಾಟ್​ನಲ್ಲಿ 26 ಎಸೆತಗಳನ್ನು ಎದುರಿಸಿ 3 ಬೌಂಡರಿ, 2 ಸಿಕ್ಸರ್ ಸಹಿತ 36 ರನ್ ಗಳಿಸಿ ಪ್ರಮುಖ ಪಾತ್ರವಹಿಸಿದರು.

ಎಸ್​ಆರ್​ಹೆಚ್​ಗೆ ಏನಾಯ್ತು?

ತನ್ನ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 246 ರನ್​ಗಳ ದಾಖಲೆಯ ಚೇಸ್ ಮಾಡಿದ್ದ ಸನ್​ರೈಸರ್ಸ್ ಹೈದರಾಬಾದ್ ಬ್ಯಾಟರ್ಸ್​ ಈ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದು ಅಚ್ಚರಿ ಮೂಡಿಸಿತು. ಅಭಿಷೇಕ್ ಶರ್ಮಾ (40), ಟ್ರಾವಿಸ್ ಹೆಡ್ (28), ಹೆನ್ರಿಚ್ ಕ್ಲಾಸೆನ್ (37) ದೊಡ್ಡ ಸ್ಕೋರ್​ಗೆ ಯತ್ನಿಸಿದರಾದರೂ ಮುಂಬೈ ಬೌಲರ್​ಗಳ ಹೊಡಿಬಡಿ ಆಟವಾಡಲು ಸಾಧ್ಯವಾಗಲಿಲ್ಲ. ಎಂಐ ಬೌಲರ್​ಗಳ ನಿಧಾನಗತಿಯ ಮತ್ತು ತಿರುವು ಪಡೆದ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಹರಸಾಹಸ ಪಟ್ಟರು. ಹಲವು ಜೀವದಾನ ಪಡೆದಿದ್ದರ ಹೊರತಾಗಿಯೂ ಯಾರೂ 50ರ ಗಡಿ ದಾಟಿಲ್ಲ.

ಪ್ರಸನ್ನಕುಮಾರ್ ಪಿ.ಎನ್.: ‘ಹಿಂದೂಸ್ತಾನ್ ಟೈಮ್ಸ್​​ ಕನ್ನಡ’ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

Whats_app_banner

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!