Latest Kannada Nation & World
ಮಗ-ಸೊಸೆ ಸಂಸಾರದಲ್ಲಿರುವ ದೋಷ ಪರಿಹಾರಕ್ಕೆ ಊಟ, ನೀರು ಬಿಟ್ಟು ವ್ರತ ಆರಂಭಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಊಟ, ನೀರು ಬಿಟ್ಟು ವ್ರತ ಮಾಡಲು ಮುಂದಾದ ಕುಸುಮಾ
ಫಕೀರ ಹೇಳಿದಾಗಿನಿಂದ ಕುಸುಮಾ ಬಹಳ ಗಾಬರಿಯಾಗಿದ್ದಾಳೆ. ಕೊನೆಗೆ ಭಾಗ್ಯಾ-ತಾಂಡವ್ಗೆ ಇರುವ ಸಮಸ್ಯೆಗೆ ಪರಿಹಾರ ಮಾಡಿಸಲು ಕುಸುಮಾ ಅರ್ಚಕರಿಗೆ ಕರೆ ಮಾಡುತ್ತಾಳೆ. ಅವರ ಸೂಚನೆ ಮೇರೆಗೆ ದೇವಸ್ಥಾನಕ್ಕೆ ಹೋಗುತ್ತಾಳೆ. ಪೂಜಾ, ಸುಂದ್ರಿ ಕೂಡಾ ಕುಸುಮಾ ಜೊತೆ ಹೋಗುತ್ತಾರೆ. ಈ ಪರಿಹಾರ ಮಾಡುವುದು ಅಷ್ಟು ಸುಲಭವಲ್ಲ, ಬಹಳ ಕಷ್ಟ ಎಂದು ಅರ್ಚಕರು ಹೇಳುತ್ತಾರೆ. ಅದು ಎಷ್ಟೇ ಕಷ್ಟವಿರಲಿ ನಾನು ಮಾಡುತ್ತೇನೆ ಎಂದು ಕುಸುಮಾ ಹೇಳುತ್ತಾಳೆ. ನೀವೇ ಕೈಯಾರೆ 108 ಹಣತೆಗಳನ್ನು ತಯಾರಿಸಿ ಅದಕ್ಕೆ ಬತ್ತಿ, ಎಣ್ಣೆ ಹಾಕಿ ದೀಪ ಹಚ್ಚಿ ಆರತಿ ಬೆಳಗಬೇಕು. ವ್ರತ ಮುಗಿಯುವರೆಗೂ ತಿಂಡಿ, ಊಟ, ನೀರು ಏನೂ ಸೇವಿಸಬಾರದು ಎನ್ನುತ್ತಾರೆ. ಇದಕ್ಕೆ ಕುಸುಮಾ ಒಪ್ಪುತ್ತಾಳೆ. ಮಗ, ಸೊಸೆ ಜೀವನ ಸರಿ ಆಗಬೇಕೆಂಬ ಕಾರಣಕ್ಕೆ ಉಪವಾಸವಿದ್ದು ವ್ರತ ಮಾಡಲು ಶುರು ಮಾಡುತ್ತಾಳೆ.